ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಗ್ಗೆ ಕೇಳದ ಜನರಿಲ್ಲ. ಇದು ಮನೆ ಮಾತಾಗಿರುವ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿ ನೆಲಸಿರುವ ಮಹಾಲಕ್ಷ್ಮಿಯು ಕಾಮಿತ ಫಲವೀವ ಕಾಮಧೇನುವಾಗಿದ್ದಾಳೆ, ನೊಂದು ಬೆಂದ ಭಕ್ತರ ನೋವು ನೀಗುವ ಅಮೃತ ಮಹಿಯಾಗಿದ್ದಾಳೆ, ಬಯಕೆಗಳನ್ನು ಕೈಗೂಡಿಸುವ ಕಲ್ಪವೃಕ್ಷವಾಗಿದ್ದಾಳೆ, ಹಸಿದ ಒಡಲಿಗೆ ಅನ್ನ ನೀಡುವ ಅನ್ನಪೂರ್ಣೆಯಾಗಿದ್ದಾಳೆ. ಹಿಂದೆ ಗೊರವನಹಳ್ಳಿಗೆ ಭೇಟಿ ನೀಡಿದ್ದ ಭಕ್ತಾಧಿಗಳು ಇಂದು ಭೇಟಿ ನೀಡಿದರೆ ಬೆರಗಾಗುವಷ್ಟು ಗೊರವನಹಳ್ಳಿ ಕ್ಷೇತ್ರ ಬೆಳೆಯುವದರೊಂದಿಗೆ ಮಹಾಲಕ್ಷ್ಮಿ ದೇವಾಲಯ ಇಂದು ಭವ್ಯವಾದ ರೀತಿಯಲ್ಲಿ ಅಭಿವೃದ್ಧಿ ಗೊಂಡಿದೆ.
ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್(ರಿ)ನ ಆಡಳಿತ ಮಂಡಳಿಯವರು ದೇವಾಲಯದ ಆವರಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಪ್ರಗತಿಯಲ್ಲಿವೆ.
⮚ ಭಕ್ತಾಧಿಗಳ ಅನುಕೂಲಕ್ಕಾಗಿ ಯಾತ್ರೀನಿವಾಸ ನಿರ್ಮಾಣ ಮಾಡಲಾಗಿದೆ.
⮚ ಭಕ್ತಾಧಿಗಳ ಅನುಕೂಲಕ್ಕಾಗಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದು ಒಂದೇ ಬಾರಿಗೆ 1000-1500 ಭಕ್ತಾದಿಗಳು ಕುಳಿತು ಊಟ ಮಾಡಬಹುದಾದಂತಹ ಬೃಹತ್ ದಾಸೋಹ ಭವನ ನಿರ್ಮಿಸಲಾಗಿದೆ.
⮚ ಭಕ್ತಾದಿಗಳು ಧ್ಯಾನ ಮಾಡಲು ವಿಶ್ರಾಂತಿ ತೆಗೆದುಕೊಳ್ಳುವ ಅನುಕೂಲಕ್ಕಾಗಿ ಶ್ರೀ ಮಾತೆ ಕಮಲಮ್ಮ ಧ್ಯಾನಮಂದಿರ ನಿರ್ಮಾಣ ಮಾಡಲಾಗಿದೆ.
⮚ ಭಕ್ತಾಧಿಗಳ ಅನುಕೂಲಕ್ಕಾಗಿ ಸ್ನಾನ ಗೃಹ, ಶೌಚ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ.
⮚ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಬಯಲು ರಂಗಮಂದಿರ ನಿರ್ಮಾಣ ಮಾಡಲಾಗಿದೆ.
⮚ ಪ್ರತಿ ತಿಂಗಳು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಟ್ರಸ್ಟ್ ವತಿಯಿಂದ ನಡೆಸಲಾಗುತ್ತದೆ.
⮚ ಪ್ರತಿ ವರ್ಷ ತಾಲ್ಲೂಕಿನಲ್ಲಿರುವ ಎಲ್ಲಾ ಪ್ರೌಢಶಾಲೆ / ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, ಇದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ.
⮚ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಪ್ರಾರಂಭಿಸಿರುತ್ತೇವೆ, ಇದರಲ್ಲಿ 600 ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ. ಇವರೆಲ್ಲರಿಗೂ ಉಚಿತ ಊಟ, ಸಮವಸ್ತ್ರ, ಪುಸ್ತಕ, ಹಾಗೂ ಲೇಖನ ಸಾಮಾಗ್ರಿಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ.
⮚ ಅನಾಥಶ್ರಮ, ವಿಕಲಚೇತನ ಮಕ್ಕಳ ಶಾಲೆ, ವೃದ್ದಾಶ್ರಮಗಳಿಗೆ ಹಾಗೂ ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದ ನಷ್ಟಕ್ಕೊಳಗಾದ ಕುಟುಂಬಕ್ಕೆ ಉಚಿತ ಪಡಿತರ, ಉಡುಗೆ ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ.
ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರು, ಕಾರ್ಯದರ್ಶಿ, ಧರ್ಮದರ್ಶಿ ಹಾಗೂ ಸಿಬ್ಬಂಧಿ ವರ್ಗದವರಿಗೆ ಈ ದೇವಾಲಯದ ಪರಿಸರವನ್ನು ಇನ್ನೂ ಅಧ್ಬುತವಾಗಿ ಅಭಿವೃದ್ಧಿ ಮಾಡುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ, ಹಾಗೂ ನಾಡಿನ ಅತ್ಯಂತ ಹೆಸರಾಂತ ಧಾರ್ಮಿಕ ಪ್ರವಾಸಿ ಸ್ಥಳವನ್ನಾಗಿ ಮಾಡುವ ಹಂಬಲವಿರುತ್ತದೆ.